ಯಾದಗಿರಿ ರೈತ ಆತ್ಮಹತ್ಯೆ: ಕೈಕೊಟ್ಟ ಮಳೆ, ಕಣ್ಮುಂದೆ ಒಣಗಿ ನಿಂತ 50 ಎಕರೆ ಬೆಳೆ..! ಸಾವಿನ ಹಾದಿ ಹಿಡಿದ ರೈತ
ಯಾದಗಿರಿ: ಕೈಕೊಟ್ಟ ಮಳೆ, 50 ಎಕರೆ ಬೆಳೆ ಒಣಗಿ ನಿಂತಾಗ ಸಾಲ ಬಾಧೆಗೆ ಸಿಲುಕಿದ ರೈತ ಜೀವ ಕಳೆದುಕೊಂಡ ಯಾದಗಿರಿ (ಸೆ. 8): ಒಂದು ಕಡೆ ಬ್ಯಾಂಕ್ ಮತ್ತು ಕೈಗಡ ಸಾಲ, ಇನ್ನೊಂದು ಕಡೆ ಮುಂಗಾರು ಮಳೆ ಕೈಕೊಟ್ಟು ಹೊಲದಲ್ಲಿ ಬೆಳೆದ ಬೆಳೆ ಕಣ್ಣೆದುರೇ ಒಣಗಿ ನಿಂತಿರುವುದು. ಈ ಎರಡು ಭಾರವನ್ನೂ ಹೊತ್ತು ನಿಲ್ಲಲಾಗದೆ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಕಾಂಡಂಗೇರಾ (ಬಿ) ಗ್ರಾಮದ ರೈತ ಮಲ್ಲಪ್ಪ ಆಲೂರು (41) ದುಡುಕಿನ ನಿರ್ಧಾರಕ್ಕೆ ಬಂದು ಜೀವ ಕಳೆದುಕೊಂಡಿದ್ದಾರೆ. … Read more
