ಪ್ರಧಾನ ಮಂತ್ರಿ ಆವಾಸ್ ಯೋಜನೆ: ಸ್ವಂತ ಮನೆ ಕಟ್ಟಲು ಸರ್ಕಾರದ ಸಬ್ಸಿಡಿ – ಸಂಪೂರ್ಣ ಮಾರ್ಗದರ್ಶಿ
ಸ್ವಂತ ಮನೆ ಎಂಬುದು ಪ್ರತಿಯೊಬ್ಬರ ಕನಸು. ಆದರೆ ಇಂದಿನ ದಿನಗಳಲ್ಲಿ ಕಟ್ಟಡ ಸಾಮಗ್ರಿಗಳ ಬೆಲೆ ಏರಿಕೆ, ಸಾಲದ ಬಡ್ಡಿ ದರಗಳು ಮತ್ತು ಜೀವನ ವೆಚ್ಚಗಳ ಹೆಚ್ಚಳದಿಂದ ಈ ಕನಸು ಸಾಕಾರಗೊಳಿಸುವುದು ಸಾಮಾನ್ಯ ಕುಟುಂಬಗಳಿಗೆ ದೊಡ್ಡ ಸವಾಲಾಗಿದೆ.
ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY) ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಆಶಾಕಿರಣವಾಗಿ ಬಂದಿದೆ.
ಸ್ವಂತ ಮನೆ ನಿರ್ಮಾಣಕ್ಕೆ ಸಾಲ ಮತ್ತು ಸಹಾಯಧನ ನೀಡುವ ಈ ಯೋಜನೆ ಲಕ್ಷಾಂತರ ಕುಟುಂಬಗಳ ಕನಸನ್ನು ನನಸು ಮಾಡುತ್ತಿದೆ.
ಯೋಜನೆಯನ್ನು 2014ರಲ್ಲಿ ಪ್ರಾರಂಭಿಸಲಾಯಿತು. ‘ಎಲ್ಲರಿಗೂ ಮನೆ’ ಎಂಬ ಗುರಿಯೊಂದಿಗೆ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಅರ್ಹ ಕುಟುಂಬಗಳಿಗೆ ಸಹಾಯ ಮಾಡುತ್ತಿದೆ.
ಇಲ್ಲಿಯವರೆಗೆ ಕೋಟಿಗೂ ಹೆಚ್ಚು ಮನೆಗಳ ನಿರ್ಮಾಣಕ್ಕೆ ಸರ್ಕಾರ ಬೆಂಬಲ ನೀಡಿದೆ. ಯೋಜನೆಯು ಮಹಿಳಾ ಸಬಲೀಕರಣಕ್ಕೂ ಒತ್ತು ನೀಡುತ್ತಿದ್ದು, ಕೆಲವು ವರ್ಗಗಳಲ್ಲಿ ಮನೆಯ ಹೆಸರು ಮಹಿಳೆಯ ಹೆಸರಿನಲ್ಲಿರಬೇಕು ಎಂಬ ಷರತ್ತು ಇದೆ.

ಯೋಜನೆಯಡಿ ಯಾರು ಅರ್ಹರು? ವರ್ಗಗಳು ಮತ್ತು ಸಹಾಯಧನ ವಿವರಗಳು
ಯೋಜನೆಯನ್ನು ಮೂರು ಮುಖ್ಯ ವರ್ಗಗಳಲ್ಲಿ ವಿಭಜಿಸಲಾಗಿದೆ. ಪ್ರತಿ ವರ್ಗಕ್ಕೆ ಆದಾಯ ಮಿತಿ, ಮನೆಯ ವಿಸ್ತೀರ್ಣ ಮತ್ತು ಸಬ್ಸಿಡಿ ಮೊತ್ತ ಬದಲಾಗುತ್ತದೆ:
- EWS (ಆರ್ಥಿಕವಾಗಿ ಹಿಂದುಳಿದ ವರ್ಗ): ವಾರ್ಷಿಕ ಆದಾಯ ₹6 ಲಕ್ಷಗಿಂತ ಕಡಿಮೆ. ಮನೆಯ ಕಾರ್ಪೆಟ್ ಪ್ರದೇಶ 30 ಚದರ ಮೀಟರ್. ಮನೆಯ ಹೆಸರು ಮಹಿಳೆಯ ಹೆಸರಿನಲ್ಲಿರಬೇಕು. ಗರಿಷ್ಠ ಸಾಲ ₹6 ಲಕ್ಷ, ಸಬ್ಸಿಡಿ ₹2.67 ಲಕ್ಷ ವರೆಗೆ. ಸಬ್ಸಿಡಿ ನೇರವಾಗಿ ಮಹಿಳೆಯ ಖಾತೆಗೆ ಜಮೆಯಾಗುತ್ತದೆ.
- LIG (ಕಡಿಮೆ ಆದಾಯ ವರ್ಗ): ವಾರ್ಷಿಕ ಆದಾಯ ₹6 ಲಕ್ಷರಿಂದ ₹12 ಲಕ್ಷ ನಡುವೆ. ಮನೆ ವಿಸ್ತೀರ್ಣ 60 ಚದರ ಮೀಟರ್. ಗರಿಷ್ಠ ಸಾಲ ₹9 ಲಕ್ಷ, ಸಬ್ಸಿಡಿ ₹2.35 ಲಕ್ಷ ವರೆಗೆ.
- MIG-II (ಮಧ್ಯಮ ಆದಾಯ ವರ್ಗ – II): ವಾರ್ಷಿಕ ಆದಾಯ ₹18 ಲಕ್ಷಗಿಂತ ಕಡಿಮೆ. ಕಾರ್ಪೆಟ್ ಪ್ರದೇಶ 200 ಚದರ ಮೀಟರ್ ವರೆಗೆ. ಗರಿಷ್ಠ ಸಾಲ ₹12 ಲಕ್ಷ, ಸಹಾಯಧನ ₹2.30 ಲಕ್ಷ ವರೆಗೆ.
ಸಬ್ಸಿಡಿಯು ಬಡ್ಡಿ ಸಹಾಯವಾಗಿ ಕಾರ್ಯನಿರ್ವಹಿಸುತ್ತದೆ. ಬ್ಯಾಂಕ್ ಸಾಲ ಪಡೆದು ಮನೆ ಕಟ್ಟುವವರಿಗೆ ಸರ್ಕಾರ ನೇರವಾಗಿ ಬಡ್ಡಿ ರೂಪದಲ್ಲಿ ಸಹಾಯ ಮಾಡುತ್ತದೆ.
ಅಗತ್ಯ ದಾಖಲೆಗಳು ಮತ್ತು ಅರ್ಜಿ ಪ್ರಕ್ರಿಯೆ.?
ಅರ್ಜಿ ಸಲ್ಲಿಸುವ ಮೊದಲು ಈ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಿ:
- ಆಧಾರ್ ಕಾರ್ಡ್
- ವಿಳಾಸ ಪ್ರಮಾಣಪತ್ರ
- ಆದಾಯ ಪ್ರಮಾಣಪತ್ರ
- ಸಕ್ರಿಯ ಮೊಬೈಲ್ ಸಂಖ್ಯೆ
- ಬ್ಯಾಂಕ್ ಪಾಸ್ಬುಕ್
- ಪಾಸ್ಪೋರ್ಟ್ ಗಾತ್ರದ ಫೋಟೋ
ಅರ್ಜಿ ಸಲ್ಲಿಸುವುದು ಸುಲಭ. ಅಧಿಕೃತ ಪೋರ್ಟಲ್ ಮೂಲಕ ಆನ್ಲೈನ್ ಅರ್ಜಿ ಸಲ್ಲಿಸಬಹುದು. ಆನ್ಲೈನ್ ಸೌಲಭ್ಯ ಇಲ್ಲದಿದ್ದರೆ ಹತ್ತಿರದ ಗ್ರಾಮ ಒನ್ ಅಥವಾ ಕರ್ನಾಟಕ ಒನ್ ಕೇಂದ್ರಕ್ಕೆ ಭೇಟಿ ನೀಡಿ.
ಅಲ್ಲಿನ ಸಿಬ್ಬಂದಿ ದಾಖಲೆಗಳೊಂದಿಗೆ ಅರ್ಜಿ ಭರ್ತಿ ಮಾಡಲು ಸಹಾಯ ಮಾಡುತ್ತಾರೆ. ಅರ್ಜಿ ಅನುಮೋದನೆಯಾದ ಬಳಿಕ ಬ್ಯಾಂಕ್ ಸಾಲಕ್ಕೆ ಅರ್ಜಿ ಸಲ್ಲಿಸಿ.
ಯೋಜನೆಯಿಂದ ಯಾರಿಗೆ ಪ್ರಯೋಜನ?
ಈ ಯೋಜನೆ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ದೊಡ್ಡ ಬೆಂಬಲವಾಗಿದೆ. ಮಹಿಳಾ ಯಜಮಾನ್ಯತೆಯು ಒತ್ತು ನೀಡುವುದರಿಂದ ಮಹಿಳಾ ಸಬಲೀಕರಣಕ್ಕೂ ಕೊಡುಗೆ ನೀಡುತ್ತಿದೆ
ಗ್ರಾಮೀಣ ಪ್ರದೇಶಗಳಲ್ಲಿ ಮನೆಗಳ ನಿರ್ಮಾಣ ಹೆಚ್ಚಾಗುತ್ತಿದ್ದು, ನಗರ ಪ್ರದೇಶಗಳಲ್ಲಿ ಕೂಡಾ ಸೌಲಭ್ಯಗಳು ವಿಸ್ತರಣೆಯಾಗುತ್ತಿವೆ. ಸರ್ಕಾರ ಪ್ರತಿ ವರ್ಷ ಅನುದಾನ ಹೆಚ್ಚಿಸುತ್ತಿದ್ದು, ಇನ್ನಷ್ಟು ಕುಟುಂಬಗಳು ಪ್ರಯೋಜನ ಪಡೆಯಲಿವೆ.
ಅರ್ಹರಾಗಿದ್ದರೆ ಈ ಅವಕಾಶ ಕಳೆದುಕೊಳ್ಳಬೇಡಿ.?
ಪ್ರಧಾನ ಮಂತ್ರಿ ಆವಾಸ್ ಯೋಜನೆ ಮೂಲಕ ನಿಮ್ಮ ಸ್ವಂತ ಮನೆ ಕನಸನ್ನು ನನಸು ಮಾಡಿಕೊಳ್ಳುವುದು ಇಂದು ಸುಲಭವಾಗಿದೆ. ಅರ್ಹತೆ ಪರಿಶೀಲಿಸಿ, ದಾಖಲೆಗಳನ್ನು ಸಿದ್ಧಪಡಿಸಿ ಮತ್ತು ಸಕಾಲದಲ್ಲಿ ಅರ್ಜಿ ಸಲ್ಲಿಸಿ.
ಯೋಜನೆಯು ನಿಮ್ಮ ಕುಟುಂಬಕ್ಕೆ ಸ್ಥಿರತೆ ಮತ್ತು ಭದ್ರತೆ ನೀಡುತ್ತದೆ. ಸರ್ಕಾರದ ಇಂತಹ ಕ್ರಮಗಳು ಸಾಮಾನ್ಯ ಜನರ ಜೀವನವನ್ನು ಸುಧಾರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ. ನಿಮ್ಮ ಕನಸಿನ ಮನೆಗೆ ಈ ಅವಕಾಶವನ್ನು ಬಳಸಿಕೊಳ್ಳಿ.
ಹೆಚ್ಚಿನ ಮಾಹಿತಿ ಅಗತ್ಯವಿದ್ದಲ್ಲಿ ಸಮೀಪದ ಸಹಾಯ ಕೇಂದ್ರಗಳನ್ನು ಸಂಪರ್ಕಿಸಿ. ನಿಮ್ಮ ಮನೆ ಕನಸು ಸಾಕಾರಗೊಳ್ಳಲಿ!
ಆಹಾರ ವಾಹಿನಿ ಯೋಜನೆ: ಮೊಬೈಲ್ ಕ್ಯಾಂಟೀನ್ ಆರಂಭಿಸಲು ಸರ್ಕಾರದ ₹3 ಲಕ್ಷ ಉಚಿತ ಸಹಾಯಧನ – ಸಂಪೂರ್ಣ ಮಾಹಿತಿ